Thursday, 21 August 2014

`ನಾಗರಿಕರ ಹಕ್ಕು ಕಸಿಯುವ ಯೋಜನೆಗಳು ಬೇಡ'

ಮುಂಬಯಿ: ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುವಂತಹ ಯೋಜನೆ ಅನುಷ್ಠಾನಗೊಳಿಸಲು ಮುಂದಾದರೆ ಹಲವು ಅನಾಹುತಕಾರಿ ಬೆಳವಣಿಗೆ ನಡೆಯುವ ಸಾಧ್ಯತೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಕುದುರೆಮುಖ ರಕ್ಷಿತಾರಣ್ಯ ಪ್ರದೇಶದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ ಹುಲಿ ಯೋಜನೆಯಿಂದ ತಲಾತಲಾಂ ತರ ವರ್ಷಗಳಿಂದ ಬಾಳಿಬದುಕು ಳಿದಿರುವಂತಹ ನಾಗರಿಕರು ಬೀದಿ ಪಾಲಾಗಲಿದ್ದಾರೆ. ಅವರು ಆಚರಿಸಿ ಕೊಂಡು ಬಂದಿರುವ ಸಂಸ್ಕøತಿ ನಶಿಸ ಲಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಶಿರ್ಲಾಲು ಗಣೇಶ ಕಟ್ಟೆ ಸಭಾ ಭವನದಲ್ಲಿ ಹುಲಿ ಸಂರಕ್ಷಣಾ ವಿರೋಧಿ ಸಮಿತಿಯ ವತಿಯಿಂದ ಗುರುವಾರ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, 2011ರಲ್ಲಿ ಕೇಂದ್ರ ಸರಕಾರವು ಹುಲಿ ಯೋಜನೆಯನ್ನು ಅನುಷ್ಟಾನಗೊಳಿ ಸುತ್ತದೆ ಎಂಬ ಸುದ್ದಿ ತಿಳಿದಾಕ್ಷಣ ಹೋರಾಟಕ್ಕೆ ಮುಂದಾದೆ. ಈ ಭಾಗದ ಜನತೆಯ ಜತೆ ಆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದೆ. ಬಳಿಕ ಇದಕ್ಕೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿ ದ್ದೇವೆ ಎಂದು ಹೇಳಿದ್ದೆ. ಮುಂದೆ ಮಗದೊಮ್ಮೆ ಈ ಪ್ರಸ್ತಾವನೆ ಬಂದಲ್ಲಿ ಹೋರಾಟಕ್ಕೆ ಸಿದ್ದರಾಗುವಂತೆ ಮನವಿ ಮಾಡಿದ್ದೆ. ಇದೀಗ ಅಂದಿನ ಕೇಂದ್ರ ಸರಕಾರ ಹಾಗೂ ಈ ರಾಜ್ಯ ಸರಕಾರದ ಕೊಡುಗೆಯಾಗಿರುವ ಈ ಹುಲಿಯೋಜನೆಯನ್ನು ಈ ಭಾಗದಿಂದ ಹಿಮ್ಮೆಟ್ಟಿಸುವ ಎಲ್ಲಾ ಪ್ರಯತ್ನಗಳಿಗೂ ನಾನು ಸಿದ್ದನಿದ್ದು, ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.
ಹುಲಿ ಯೋಜನೆ ವಿರೋಧಿಸಿ ತಾಲೂಕು ಪಂಚಾಯತ್‍ನಿಂದ ವಿಶೇಷ ಸಭೆ ಕರೆಯುವಂತೆ ಅವರು ಸೂಚನೆ ನೀಡಿದರು.
ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಟ್ಲುಪಾಡಿ ಸತೀಶ್ ಶೆಟ್ಟಿ ಮಾತನಾಡಿ, ಕಸ್ತೂರಿ ರಂಗನ್ ವರದಿ, ರಾಷ್ಟ್ರೀಯ ಉದ್ಯಾನ ವನ, ಹುಲಿ ಯೋಜನೆ ಮುಂತಾದ ಕಾರ್ಯಕ್ರಮಗಳಿಂದ ಪಶ್ಚಿಮಘಟ್ಟದ ಜನತೆ ಭಯಭೀತರಾಗಿದ್ದಾರೆ. ಒಂದಿ ಲ್ಲೊಂದು ಸುದ್ದಿಗಳು ಈ ಭಾಗದಲ್ಲಿ ಸದ್ದು ಮಾಡುತ್ತಿದ್ದು, ಇಲ್ಲಿನ ಜನತೆಯ ನಿದ್ದೆಗೆಡಿಸುತ್ತಿದೆ. ರಾಜಕೀಯ ರಹಿತ ವಾದ ಹೋರಾಟದ ಮೂಲಕ ನಮಗೆ ನ್ಯಾಯ ದೊರಕಬೇಕಾಗಿದ್ದು, ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಶಿರ್ಲಾಲು ಗ್ರಾ.ಪಂ. ಅಧ್ಯಕ್ಷ ನಾರಾಯಣ ಶೆಟ್ಟಿ, ಜಿ. ಪಂ. ಸದಸ್ಯೆ ಮಮತಾ ಅಧಿಕಾರಿ, ತಾ.ಪಂ. ಅಧ್ಯಕ್ಷೆ ವಿಜಯ ಕುಮಾರಿ, ಎಪಿಎಂಸಿ ಸದಸ್ಯ ಸುಂದರ ಗೌಡ, ಕೃಷ್ಣ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment

 
Support : Creating Website | Johny Template | Mas Template
Copyright © 2011. tryoutblog - All Rights Reserved
Template Created by Creating Website Published by Mas Template
Proudly powered by Blogger